ನ್ಯಾಯಮೂರ್ತಿ ಅರುಣ್ ಮಿಶ್ರ, ಎಸ್.ಎ.ನಜೀರ್ ಹಾಗೂ ಎಂ.ಆರ್.ಶಾ ಅವರನ್ನು ಒಳಗೊಂಡ ನ್ಯಾಯಪೀಠವು ಮರುಪರಿಶೀಲನೆ ಮನವಿ ತಿರಸ್ಕರಿಸಿತು. ಕಂಪನಿಗಳ ದೂರಸಂಪರ್ಕ ವಲಯ ಹೊರತಾದ ಮೂಲಗಳ ಆದಾಯವನ್ನೂ ಸೇರಿಸಿ ಬಾಕಿ ಇರುವ ಮೊತ್ತದ ಲೆಕ್ಕಾಚಾರ ಮಾಡುವಂತೆ ಕೋರ್ಟ್ ಕಳೆದ ವರ್ಷ ಅಕ್ಟೋಬರ್ 24ರಂದು ಆದೇಶಿಸಿತ್ತು.ದೂರಸಂಪರ್ಕ ಇಲಾಖೆ (ಡಿಒಟಿ) ಪ್ರತಿಪಾದಿಸಿದ್ದ ಒಟ್ಟು ಆದಾಯದ ಲೆಕ್ಕಾಚಾರವನ್ನು ಎತ್ತಿಹಿಡಿದಿತ್ತು.