ಲಖನೌ: ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ತಬ್ಲೀಗಿ ಜಮಾತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇಂಡೋನೇಷಿಯಾ ಮತ್ತು ಥಾಯ್ಲೆಂಡ್ನ17 ಮಂದಿಯ ಕ್ವಾರಂಟೈನ್ ಅವಧಿ ಮುಗಿದನಂತರ ಉತ್ತರ ಪ್ರದೇಶ ಸರ್ಕಾರವು ಜೈಲಿಗೆ ಕಳಿಸಿದೆ.
ಕ್ವಾರಂಟೈನ್ ಅವಧಿ ಮುಗಿದ ನಂತರ 17 ಮಂದಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯಿತು. ಈ ಸಂದರ್ಭ ಅವರೆಲ್ಲರೂ ವಿಸಾ ಮತ್ತು ಪಾಸ್ಪೋರ್ಟ್ ನಿಯಮಗಳನ್ನು ಉಲ್ಲಂಘಿಸಿರುವ ವಿಚಾರ ಬೆಳಕಿಗೆ ಬಂತು.
ತಾಜ್ ಮತ್ತು ಖುರೇಷಿ ಮಸೀದಿಗಳಲ್ಲಿದ್ದ 21 ಜಮಾತಿಗಳನ್ನು ಪೊಲೀಸರು ಬಂಧಿಸಿದ್ದರು. ಈ ಪೈಕಿ 17 ಮಂದಿ ವಿದೇಶಿಯರು. ಇವರೆಲ್ಲರನ್ನೂ ಮಾರ್ಚ್ 31ರಿಂದ ಕ್ವಾರಂಟೈನ್ನಲ್ಲಿ ಇರಿಸಲಾಗಿತ್ತು.ಕ್ವಾರಂಟೈನ್ನಲ್ಲಿದ್ದವರ ಸೋಂಕಿನ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ.
ಬಂಧಿತರ ಮೇಲೆ ಐಪಿಸಿ 269, 270, 271, 188 (ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದ 1897), ಪಾಸ್ಪೋರ್ಟ್ ಕಾಯ್ದೆ 1967ರ ಅನ್ವಯ ಆರೋಪಗಳನ್ನು ಹೊರಿಸಲಾಗಿದೆ. ಪ್ರಸ್ತುತ ಇವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.