ವಿರುಧುನಗರ: ತಮಿಳುನಾಡಿನ ರಕ್ತ ನಿಧಿಗಳಲ್ಲಿ ಸಂಗ್ರಹಿಸಿಡಲಾಗಿರುವ ರಕ್ತದ ತಪಾಸಣೆ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಆದೇಶಿಸಿದೆ.
ರಕ್ತ ನಿಧಿಯಿಂದ ಪಡೆಯಲಾದ ರಕ್ತವನ್ನು 24 ವರ್ಷದ ಗರ್ಭಿಣಿಯೊಬ್ಬರಿಗೆ ನೀಡಿದ ಬಳಿಕ ಎಚ್ಐವಿ ಸೋಂಕಿಗೆ ಒಳಗಾಗಿದ್ದರು. ಈ ಪ್ರಕರಣದ ಬಳಿಕ ಪ್ರಯೋಗಾಲಯದ ಮೂವರು ತಂತ್ರಜ್ಞರನ್ನು ಕೆಲಸದಿಂದ ವಜಾಗೊಳಿಸಲಾಗಿದೆ.