ಕರ್ನಾಟಕ, ಆಂಧ್ರಪ್ರದೇಶ ಹಾಗೂ ಕೇರಳದ ಗಡಿಯನ್ನು ಮುಂಜಾಗ್ರತಾ ಕ್ರಮವಾಗಿ ಮುಚ್ಚುವುದಾಗಿ ಶುಕ್ರವಾರ ಸರ್ಕಾರ ತಿಳಿಸಿದೆ. ಹಾಲು, ಪೆಟ್ರೋಲ್, ಡೀಸೆಲ್, ತರಕಾರಿ, ಔಷಧ, ಎಲ್ಪಿಜಿ ಸಿಲಿಂಡರ್ ಸರಬರಾಜು ವಾಹನಗಳಿಗಷ್ಟೇ ತಮಿಳುನಾಡು ಪ್ರವೇಶಕ್ಕೆ ಅವಕಾಶವಿರಲಿದೆ. ಕಾರ್ಗೊ ಟ್ರಕ್, ಆಂಬುಲೆನ್ಸ್ ಹಾಗೂ ಲಘು ಮೋಟಾರು ವಾಹನಗಳಲ್ಲಿ ಅನಿವಾರ್ಯ ಕಾರಣದ ನಿಮಿತ್ತ ಪ್ರಯಾಣಿಸುವವರಿಗೆ ಯಾವುದೇ ಅಡ್ಡಿ ಇಲ್ಲ.