55 ವರ್ಷ ವಯಸ್ಸಿನ ಕುಪ್ಪನ್ ಅಪಘಾತವೊಂದರಲ್ಲಿ ಆ. 16 ರಂದು ಮೃತಪಟ್ಟಿದ್ದರು. ಅವರ ಮೃತದೇಹವನ್ನು ಮೇಲ್ಜಾತಿ ಜನರ ಹೊಲಗಳ ಮೂಲಕ ತೆಗೆದುಕೊಂಡು ಹೋಗಲು ಅವಕಾಶ ಇರಲಿಲ್ಲ. ಹಾಗಾಗಿ ಸೇತುವೆಯಿಂದ ಕೆಳಕ್ಕೆ ಇಳಿಸಿ ನದಿ ಮೂಲಕ ಒಯ್ಯಬೇಕಾಯಿತು. ಈ ಪ್ರಕರಣ ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದೆ. ಪ್ರಕರಣಕ್ಕೆ ಜಾತಿ ತಾರತಮ್ಯದ ಆಯಾಮ ಇಲ್ಲ ಎಂದು ವೆಲ್ಲೂರು ಜಿಲ್ಲಾಡಳಿತ ಹೇಳಿದೆ. ಆದರೆ, ದಲಿತರ ಸ್ಮಶಾನಕ್ಕಾಗಿ ಅರ್ಧ ಎಕರೆ ಸ್ಥಳ ಮಂಜೂರು ಮಾಡಿದೆ.