ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳುನಾಡಿನ ಜನ 2021ರಲ್ಲಿ ಅದ್ಭುತ ಸೃಷ್ಟಿಸುತ್ತಾರೆ: ರಜನಿಕಾಂತ್

ವಿಧಾನಸಭೆ ಚುನಾವಣೆ ಕುರಿತು ರಜನಿಕಾಂತ್
Last Updated 21 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಜನರು 2021ರ ವಿಧಾನಸಭಾ ಚುನಾವಣೆಯಲ್ಲಿ ಶೇ 100ರಷ್ಟು ‘ಅದ್ಭುತ’ ಸೃಷ್ಟಿಸುತ್ತಾರೆ ಎಂದು ನಟ ರಜನಿಕಾಂತ್ ಗುರುವಾರ ಹೇಳಿದ್ದಾರೆ.

ರಜನಿಕಾಂತ್ ಅವರ ‘ಆಧ್ಯಾತ್ಮಿಕ ರಾಜಕಾರಣ’ ದ್ರಾವಿಡರ ಭೂಮಿ ತಮಿಳುನಾಡಿನಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಎಐಎಡಿಎಂಕೆ ನಾಯಕರೊಬ್ಬರು ಈಚೆಗೆ ಹೇಳಿಕೆ ನೀಡಿದ್ದರು. ಈ ಕುರಿತು ರಜನಿಕಾಂತ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಗುರುವಾರ ವರದಿಗಾರರ ಜತೆ ಮಾತನಾಡಿದ ಅವರು ಇನ್ನೊಂದು ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ನಾನು ಪಕ್ಷ ಆರಂಭಿಸಿದರೆ, ಆಗ ಕಮಲ್ ಹಾಸನ್ ಅವರ ‘ಮಕ್ಕಳ್‌ ನೀಧಿ ಮಯ್ಯಂ (ಎಂಎನ್‌ಎಂ)’ ಜತೆ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಸಬೇಕು. ಅಲ್ಲಿಯವರೆಗೆ ಈ ಕುರಿತು ನಾನು ಮಾತನಾಡಲು ಬಯಸುವುದಿಲ್ಲ’ ಎಂದಿದ್ದಾರೆ.

ರಾಜ್ಯದ ಶ್ರೇಯೋಭಿವೃದ್ಧಿಗಾಗಿ ನಾವು ಒಂದಾಗಲು ಸಿದ್ಧ ಎಂದು ರಜನಿಕಾಂತ್ ಹಾಗೂ ಕಮಲ್‌ಹಾಸನ್ ಮಂಗಳವಾರ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವರದಿಗಾರರು ಕಮಲ್‌ ಜತೆಗಿನ ಮೈತ್ರಿ ಬಗ್ಗೆ ಪ್ರಶ್ನಿಸಿದ್ದರು.

ರಜನಿಕಾಂತ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ‘ಅವರು ಹೇಳಿದ ಅದ್ಭುತ ಎಂದರೆ, 2021ರಲ್ಲಿ ಪುನಃ ಎಐಎಡಿಎಂಕೆ ಅಧಿಕಾರಕ್ಕೆ ಬರುವುದು’ ಎಂದು ಹೇಳಿದ್ದಾರೆ.

ರಜನಿಕಾಂತ್‌ ಅವರ ‘ಆಧ್ಯಾತ್ಮಿಕ ರಾಜಕಾರಣ’ ಹಾಗೂ ಕಮಲ್‌ಹಾಸನ್ ಅವರ ಎಡಪಂಥೀಯ ಒಲವು ಒಟ್ಟಾಗಿ ಸಾಗಲು ಸಾಧ್ಯವಿಲ್ಲ ಎಂದು ಎಐಎಡಿಎಂಕೆ ಗುರುವಾರ ತನ್ನ ಮುಖವಾಣಿ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT