ಯುವ ಕಾಂಗ್ರೆಸ್ ಮುಖಂಡನಾಗಿದ್ದ ಸುಶೀಲ್ ಶರ್ಮಾ, ಪತ್ನಿ ಆಕೆಯ ಸ್ನೇಹಿತನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬ ಕಾರಣಕ್ಕೆ 1995ರಲ್ಲಿ ಆಕೆಯನ್ನು ಹತ್ಯೆ ಮಾಡಿದ್ದ. ನಂತರ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ದೇಹವನ್ನು ಕತ್ತರಿಸಿ ರೆಸ್ಟೋರೆಂಟ್ನ ತಂದೂರಿ ಒಲೆಯೊಳಗೆ ಹಾಕಿದ್ದ. ಹಾಗಾಗಿ ಈ ಪ್ರಕರಣವು ತಂದೂರಿ ಕೊಲೆ ಪ್ರಕರಣವೆಂದೇ ಕುಖ್ಯಾತಿ ಪಡೆದಿತ್ತು.