ಪಟ್ನಾ: ದಾಂಪತ್ಯ ಜೀವನಕ್ಕೆ ಕಾಲಿಟ್ಟ 6 ತಿಂಗಳುಗಳಲ್ಲೇ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿರುವುದನ್ನು ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ದೃಢಪಡಿಸಿದ್ದಾರೆ.
‘ಐಶ್ವರ್ಯಾ ರಾಯ್ ಅವರನ್ನು ಮದುವೆಯಾಗಲು ಇಷ್ಟವಿರಲಿಲ್ಲ. ಒತ್ತಾಯಕ್ಕೆ ಮಣಿದು ವಿವಾಹವಾಗಿದ್ದೆ. ಈಗ ಉಸಿರು ಕಟ್ಟಿಕೊಂಡು ಜೀವನ ನಡೆಸುವುದಕ್ಕಿಂತ ವಿಚ್ಛೇದನ ಪಡೆಯುವುದು ಒಳಿತು ಎನಿಸಿತು. ಹಾಗಾಗಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ’ ಎಂದು ತೇಜ್ ಪ್ರತಾಪ್ ಸ್ಪಷ್ಟಪಡಿಸಿದ್ದಾರೆ.