ತೆಲಂಗಾಣ ಮಾಧ್ಯಮಿಕ ಶಿಕ್ಷಣ ಮಂಡಳಿ ನಡೆಸಿದ ಪಿ.ಯು ಪರೀಕ್ಷೆಯ ಫಲಿತಾಂಶ ಗೊಂದಲದಿಂದ 22 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಆರೋಪಿಸಿರುವ ವಿರೋಧ ಪಕ್ಷಗಳು, ಸರ್ಕಾರದ ಶಿಕ್ಷಣ ನೀತಿಯ ವಿರುದ್ಧ ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದವು. ಮುಖಂಡರನ್ನು ಸ್ವಾಗತಿಸಲು ಹನುಮಂತರಾವ್ ಮೈಕ್ ಹಿಡಿದುಕೊಂಡಿದ್ದಾಗ ಅವರ ಕುರ್ಚಿಯನ್ನು ನಾಗೇಶ್ ಎಳೆದುಕೊಂಡಿದ್ದರು.