‘ಕಾಂಗ್ರೆಸ್ ಮತ್ತು ಟಿಆರ್ಎಸ್ ಕೇವಲ ಅಲ್ಪಸಂಖ್ಯಾತರನ್ನು ಸಮಾಧಾನಪಡಿಸುವ ನೀತಿ ಅನುಸರಿಸುತ್ತಿವೆ. ಆದರೆ, ಬಿಜೆಪಿ ಜಾತಿ, ಧರ್ಮ ನೋಡದೇ ಪ್ರತಿಯೊಬ್ಬರ ರಕ್ಷಣೆಗೆ ಬದ್ಧವಾಗಿದೆ. ತೆಲಂಗಾಣ ರಾಜ್ಯ ಉದಯವಾದಾಗ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವುದಾಗಿ ಚಂದ್ರಶೇಖರ ರಾವ್ ಹೇಳಿದ್ದರು. ಆದರೆ, ಈಗ ಅದನ್ನು ಅವರು ಮರೆತಿದ್ದಾರೆ. ಪರಿಶಿಷ್ಟ ಜಾತಿಯವರಿಗೆ 3 ಎಕರೆ ಭೂಮಿ ಈವರೆಗೂ ಯಾಕೆ ನೀಡಿಲ್ಲ? ಕುಡಿಯುವ ನೀರಿನ ಸೌಲಭ್ಯ ಸಹ ಒದಗಿಸಿಲ್ಲ’ ಎಂದು ಆರೋಪಿಸಿದರು.