ಭದ್ರತಾ ಪಡೆ ಹಾಗೂ ಉಗ್ರರ ನಡುವಿನ ಹೋರಾಟದ ಸಂದರ್ಭಗಳಲ್ಲಿ ನಡೆಯುತ್ತಿದ್ದ ಕಲ್ಲು ತೂರಾಟದಂತಹ ಘಟನೆಗಳು ವರದಿಯಾಗಿಲ್ಲ.ಇದರಿಂದಾಗಿ ಸಹಜವಾಗಿ ಆಶ್ರುವಾಯು,ರಬ್ಬರ್ ಗುಂಡು ಬಳಕೆ ಕಡಿಮೆಯಾಗಿದ್ದು,ಈ ವೇಳೆ ಆಗುತ್ತಿದ್ದ ಸಾವು–ನೋವುಗಳ ಸಂಖ್ಯೆಯೂ ಕಡಿಮೆಯಾಗಿದೆ.ಇದಕ್ಕೆ ಅಂತರ್ಜಾಲ ಸ್ಥಗಿತ ಮತ್ತು370ನೇ ವಿಧಿ ರದ್ದು ಮಾಡಿದ ನಂತರದ ಬೆಳವಣಿಗೆ ಕಾರಣವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.