ಈ ಪಿಐಎಲ್ಗೆ ಸಂಬಂಧಿಸಿ ನೀಡಲಾಗಿದ್ದ ನೋಟಿಸ್ಗೆ ಕೇಂದ್ರ ಸರ್ಕಾರ ಸಲ್ಲಿಸಿರುವ ಪ್ರತಿಕ್ರಿಯೆ ಪರಿಗಣಿಸಿದ ಪೀಠ, ‘ವಲಸಿಗ ಕಾರ್ಮಿಕರ ನೆರವಿಗಾಗಿ ಕೇಂದ್ರ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಮುಂದಿನ 10–15 ದಿನಗಳ ಅವಧಿಗೆ ಕೇಂದ್ರದ ನಿರ್ಣಯಗಳಲ್ಲಿ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಏಪ್ರಿಲ್ 13ರಂದು ಮುಂದಿನ ವಿಚಾರಣೆ ನಡೆಸಲಾಗುವುದು’ ಎಂದು ಹೇಳಿತು.