ಅಸಂಘಟಿತ ವಲಯದಲ್ಲಿರುವವರಿಗಿರುವ ಪಿಂಚಣಿ ಯೋಜನೆಯಾದ ಪಿಎಂ ಶ್ರಮ್ ಯೋಗಿ ಮಾನ್ಧನ್ ಯೋಜನೆಗೆ ಮೋದಿ ಚಾಲನೆ ನೀಡಿದ್ದಾರೆ. ಮಧ್ಯವರ್ತಿ ಸಂಸ್ಕೃತಿಯನ್ನು ತಾನು ಕೊನೆಗಾಣಿಸಿರುವುದರಿಂದ ವಿಪಕ್ಷಗಳಿಗೆ ಕಿರಿಕಿರಿಯಾಗಿದೆ. ಅವರ ಕೆಲಸಗಳಿಗೆ ಧಕ್ಕೆ ಆಗುತ್ತಿದೆ ಎಂಬ ಕಾರಣದಿಂದ ಅವರು ಮೋದಿ ಹಠಾವೋ, ಮೋದಿ ಹಠಾವೋ ಎಂದು ಕೂಗುತ್ತಿದ್ದಾರೆ.ಆದರೆ ಈ ಚೌಕೀದಾರ ತಮ್ಮ ನಿರ್ಧಾರಗಳ ಮೇಲೆ ಗಟ್ಟಿಯಾಗಿ ನಿಂತಿದ್ದಾನೆ ಎಂದು ಮೋದಿ ಹೇಳಿದ್ದಾರೆ.