ತಿರುವಣ್ಣೂರಿನ ಶೂರಸಂಹಾರ ಜಾತ್ರೆಗೆ ಶತಮಾನಗಳ ಇತಿಹಾಸವಿದೆ. ದೇವಾಯದ ಗೋಡೆಯಲ್ಲಿ ಚಿತ್ತಾರ ಬಿಡಿಸುವ ಆಗ್ರಹ ಬಗ್ಗೆ ಹಫೀಸಾ, ಅಪ್ಪ ಹನೀಫಾ ಅವರಿಗೆ ತಿಳಿಸಿದ್ದರು. ಹನೀಫಾ ಅವರು ದೇವಾಲಯದ ಪಕ್ಕದಲ್ಲಿಯೇ ವ್ಯಾಪಾರ ಮಾಡುತ್ತಿದ್ದಾರೆ.ಮಗಳು ಹೇಳಿದ ವಿಷಯವನ್ನು ಹನೀಫಾ ಅವರು ದೇವಾಲಯದ ಸಮಿತಿ ಅವರಿಗೆ ತಿಳಿಸಿದ್ದರು.ದೇವಾಲಯದ ಸಮಿತಿ ಮರುಮಾತಿಲ್ಲದೆ ಹಫೀಸಾ ಅವರ ಆಗ್ರಹಕ್ಕೆ ಸಮ್ಮತಿಸಿದ್ದರು.
ಕಳೆದ 30 ವರ್ಷಗಳಿಂದ ದೇವಸ್ಥಾನದ ಜಾತ್ರೆಗೆ ಸಹಕರಿಸುತ್ತಿರುವ ವ್ಯಕ್ತಿ ನಾನು ಎಎಂದು ಹನೀಫಾ ಹೇಳಿದ್ದಾರೆ. ತಿರುವಣ್ಣೂರ್ ನಾಟ್ಟು ವರ್ತಮಾನಂ ಎಂಬ ವಾಟ್ಸ್ ಆ್ಯಪ್ ಗುಂಪಿನ ಸಕ್ರಿಯ ಸದಸ್ಯರೂ ಆಗಿದ್ದಾರೆ ಇವರು.
ಕಳೆದ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಹಫೀಸಾ ದೇವಾಲಯದ ಆವರಣ ಗೋಡೆಯಲ್ಲಿ ಚಿತ್ರ ಬಿಡಿಸಿದ್ದಾರೆ.ಸೋಮವಾರ, ಮಂಗಳವಾರ, ಬುಧವಾರ ಸಂಜೆ 6 ಗಂಟೆಯಿಂದ 10 ಗಂಟೆವರೆಗೆ ಪೇಟಿಂಗ್ ಮಾಡಿದ್ದಾರೆ.ಸಹೋದರಿಯರಾದ ಹುದಾ ಮತ್ತು ಫಿದಾ, ಹಫೀಸಾ ಅವರಿಗೆ ಜತೆಯಾದರೆರಾತ್ರಿ ವೇಳೆ ಅಪ್ಪ ಹನೀಫಾ ಸಹಾಯ ಮಾಡುತ್ತಾರೆ.
ತಮಿಳುನಾಡಿನ ದೇವಾಲಯದಲ್ಲಿ ಶೂರ ಸಂಹಾರ ಕಾರ್ಯಗಳು ನಡೆಯುತ್ತಿದ್ದರೂ ಕೇರಳದ ತಿರುವಣ್ಣೂರ್ ಸೇರಿದಂತೆ ಕೆಲವೇ ಕೆಲವು ದೇವಾಲಯಗಳಲ್ಲಿ ಈ ಕಾರ್ಯ ನಡೆಯುತ್ತದೆ.