‘ಹುಲಿ ಇರುವ ಪ್ರದೇಶದ ಬಗ್ಗೆ ಮಾಹಿತಿ ಪ್ರತಿ 12 ಗಂಟೆಗೊಮ್ಮೆ ದೊರೆಯುತ್ತಿದೆ. ಖಂಡಾಲಾ ಮತ್ತು ಕಲ್ಗಾಂವ್ನಲ್ಲಿ ‘ಟ್ರ್ಯಾಪ್ ಕ್ಯಾಮೆರಾ’ ಅಳವಡಿಸಲಾಗಿದ್ದು, ತಪ್ಪಿಸಿಕೊಂಡ ಹುಲಿಯ ಪತ್ತೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅರಣ್ಯ ಇಲಾಖೆ ಅಧಿಕಾರಿ ಕೇಶವ್ ವಾಬ್ಲೆ ತಿಳಿಸಿದ್ದಾರೆ. ‘ಹುಲಿ ನರಭಕ್ಷಕವಲ್ಲ. ಆದರೆ, ಆತಂಕಗೊಂಡರೆ ಮನುಷ್ಯರ ಮೇಲೆ ದಾಳಿ ನಡೆಸಬಹುದು’ ಎಂದು ತಿಳಿಸಿದ್ದಾರೆ.