‘2014ರ ಚುನಾವಣೆ ವೇಳೆ ಮೋದಿ ಹಲವು ಭರವಸೆಗಳನ್ನು ನೀಡಿದ್ದರು. ಅವುಗಳಲ್ಲಿ ಯಾವೊಂದನ್ನೂ ಮೋದಿಯಾಗಲೀ, ಬಿಜೆಪಿಯಾಗಲೀ ಈಡೇರಿಸಿಲ್ಲ. ಉಗ್ರರ ದಾಳಿ ಮತ್ತು ಪಾಕಿಸ್ತಾನವನ್ನು ಮೋದಿ ಸರ್ಕಾರ ನಿರ್ವಹಿಸಿದ ರೀತಿ ಸರಿಯಿಲ್ಲ. ರಾಷ್ಟ್ರೀಯತೆಗಿಂತ ರಾಷ್ಟ್ರಪ್ರೇಮ ಅತ್ಯಂತ ಮುಖ್ಯವಾದುದು. ಎಲ್.ಕೆ.ಅಡ್ವಾಣಿಯಂತಹ ಹಿರಿಯ ನಾಯಕರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ಬಿಜೆಪಿ ಕಾಂಗ್ರೆಸ್ನಂತೆಯೇ ಪರಿವರ್ತನೆಯಾಗಿದೆ’ ಎಂದು ಅವರು ಟೀಕಿಸಿದ್ದಾರೆ.