ಜಮೀನು ಪರಿಹಾರ ವಿತರಣೆಯಲ್ಲಿ ನಡೆದಿತೆನ್ನಲಾದ ಅಕ್ರಮ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು. 2010ರಲ್ಲಿ ಬಿಬಿಎಂಪಿ ಸದಸ್ಯರಾಗಿದ್ದ ಕಟ್ಟಾ ಜಗದೀಶ್, ಈ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ರಾಮಾಂಜನಪ್ಪ ಎಂಬುವರಿಗೆ ಸಾಕ್ಷ್ಯ ಹೇಳದಂತೆ ಒತ್ತಡ ಹೇರಿದ್ದರು. ಇದಕ್ಕೆ ಪ್ರತಿಯಾಗಿ ಒಂದು ಲಕ್ಷ ಹಣ ಪಡೆಯುವಂತೆ ಅಗ್ರಹಿಸಿದ್ದರು. ಅಲ್ಲದೆ, ತಮ್ಮ ಸದಾಶಿವನಗರದ ಮನೆಯಲ್ಲಿದ್ದ ಕುಮಾರ್ ಎಂಬುವರಿಗೆ ಫೋನ್ ಮಾಡಿ, ರಾಮಾಂಜನಪ್ಪ ಅವರಿಗೆ ಹಣ ನೀಡುವಂತೆ ತಿಳಿಸಿದ್ದರು.