ಯಾಕೆಂದರೆ ಅಷ್ಟು ದೊಡ್ಡದಾದ ಇನ್ಫೋಸಿಸ್ ನ ಒಡೆಯರಾದ ಶ್ರೀ ನಾರಾಯಣ ಮೂರ್ತಿಯವರ ಅರ್ಧಾಂಗಿನಿಯಾದರೂ ತಾನು ವಿದ್ಯಾವಂತೆ, ಶ್ರೀಮಂತೆ ಎನ್ನುವ ಅಹಂಕಾರವಿಲ್ಲದೆ ಆ ಮಹಾನ್ ಸಂಗೀತಗಾರನ ಆಶೀರ್ವಾದ ವನ್ನು ಪಡೆದಿದ್ದರು. 'ವಿದ್ಯಾ ವಿನಯಂ ದದಾತಿ ', ಅಂದರೆ ವಿದ್ಯೆಯು ವಿನಯವನ್ನು ಕೊಡುತ್ತದೆ ಎಂಬುದಕ್ಕೆ ಇವರೇ ನಿದರ್ಶನ. ಇದು ಮಾತ್ರವಲ್ಲದೆ ಇನ್ಫೋಸಿಸ್ ಫೌಂಡೇಶನ್ ಮೂಲಕ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ತಮ್ಮ ಜೀವನವನ್ನೇ ಉದಾಹರಣೆಯಾಗಿ ಇತರರಿಗೆ ಮಾದರಿಯಾಗಿ ಬದುಕುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಅವರೇ ನನಗೆ ಸ್ಫೂರ್ತಿ.