ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇತುವೆಯಲ್ಲೇ ಬೋಗಿ ಬಿಟ್ಟು ಸಾಗಿದ ರೈಲು

ರಾಜಧಾನಿ ಎಕ್ಸ್‌ಪ್ರೆಸ್‌ನಲ್ಲೊಂದು ಅವಾಂತರ
Last Updated 2 ಏಪ್ರಿಲ್ 2019, 17:32 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಕೇವಲ ಎರಡೇ ಬೋಗಿಗಳನ್ನು ಎಳೆದುಕೊಂಡು ಉಳಿದ ಬೋಗಿಗಳನ್ನು ಸೇತುವೆಯಲ್ಲಿ ಬಿಟ್ಟು ರೈಲು ಮುಂದಕ್ಕೆ ಓಡಿದೆ!

‘ಓಡಿ ಹೋದ’ ರೈಲಿನ ಹಿಂದೆ ಅಧಿಕಾರಿಗಳು ಬೆನ್ನತ್ತಿ ಬಂದು ತ್ರಿಶಂಕು ಸ್ಥಿತಿಯಲ್ಲಿದ್ದ ಬೋಗಿಗಳನ್ನು ನಿಲ್ದಾಣದತ್ತ ಒಯ್ದರು. ಕಳಚಿಕೊಂಡ ಬೋಗಿಗಳನ್ನು ಮತ್ತೆ ಜೋಡಿಸಿ ರೈಲನ್ನು ಮುಂದಕ್ಕೆ ಕಳುಹಿಸಿದರು. ಸೇತುವೆ ಮಧ್ಯೆ ನಿಂತಿದ್ದ ಬೋಗಿಗಳಲ್ಲಿದ್ದ ಪ್ರಯಾಣಿಕರು ಕೊನೆಗೂ ನಿಟ್ಟುಸಿರುಬಿಟ್ಟರು.

ಭುವನೇಶ್ವರ –ನವದೆಹಲಿ ನಡುವೆ ಸಂಚರಿಸುವ ರಾಜಧಾನಿ ಎಕ್ಸ್‌ಪ್ರೆಸ್‌ ಹೀಗೆ ಬೋಗಿಗಳನ್ನು ಸೇತುವೆಯಲ್ಲಿ ಬಿಟ್ಟು ಓಡಿದ ರೈಲು.

‘ಭುವನೇಶ್ವರದಿಂದ ಹೊರಡುವ ಮುನ್ನ ಕಟಕ್‌ ಡಿಪೊದಲ್ಲಿ ರೈಲನ್ನು ಸರಿಯಾಗಿ ಪರಿಶೀಲಿಸಿಯೇ ಬಿಟ್ಟಿದ್ದೆವು. ಆದರೆ ಎಂಜಿನ್‌ ಕಳಚಿಕೊಂಡು ಬಿಟ್ಟಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT