‘ಭಾನುವಾರ ಬೆಳಗಿನ ಜಾವ ನಾವು ಎರುಮೇಲಿ ತಲುಪಿದೆವು.ಆದರೆ ನಮಗೆ ಭದ್ರತೆ ನೀಡಲು ಪೊಲೀಸರು ನಿರಾಕರಿಸಿದರು. ದರ್ಶನ ಪಡೆಯಲು ನಿಮಗೆ ನಿಷೇಧವಿಲ್ಲ, ಆದರೆ ಈ ಕುರಿತು ಕಾನೂನಾತ್ಮಕವಾಗಿ ಸ್ಪಷ್ಟನೆ ದೊರಕಬೇಕಿದೆ ಎಂದರು. ಮಾನಸಿಕವಾಗಿ ಕಿರುಕುಳ ನೀಡಿದ ಪೊಲೀಸರು, ದೇಗುಲಕ್ಕೆ ತೆರಳಬೇಕೆಂದರೆ ಪುರುಷರ ದಿರಿಸು ಧರಿಸಬೇಕೆಂದು ಒತ್ತಾಯಿಸಿದರು’ ಎಂದು ಇವರು ಆರೋಪಿಸಿದ್ದಾರೆ. ಪೊಲೀಸರ ಕ್ರಮದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.