ಸುಪ್ರೀಂ ಕೋರ್ಟ್ ತೀರ್ಪು ಬಗ್ಗೆ ಕೇಳಿ ಖುಷಿಯಾಗಿದೆ.ಮಹಿಳೆಯರಿಗೆ ಅವರ ಹಕ್ಕು ಸಿಕ್ಕಿದೆ. ಅಯ್ಯಪ್ಪ ಸ್ವಾಮಿ ಭಕ್ತರ ಅಭಿಪ್ರಾಯ ಕೇಳಿದ ನಂತರವೇ ನ್ಯಾಯಾಲಯ ಈ ತೀರ್ಪು ನೀಡಿದ್ದು, ಇದಾದ ನಂತರವೂ ಪ್ರತಿಭಟನೆ ನಡೆಸುವುದು ನ್ಯಾಯಾಲಯದ ತೀರ್ಪು ಕಡೆಗಣಿಸಿದಂತೆ.ಕೇರಳದಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆಗಳು ಅನಗತ್ಯ.ಇದು ಸಂವಿಧಾನದ ವಿರುದ್ಧ ಮತ್ತು ಮಹಿಳೆಯರ ಹಕ್ಕುಗಳನ್ನು ಹತ್ತಿಕ್ಕುವ ಪ್ರಯತ್ನವಾಗಿದೆ.ಇಂಥಾ ಪ್ರತಿಭಟನೆಗಳು ಯಾಕೆ ಎಂಬುದನ್ನು ಕಾಂಗ್ರೆಸ್ ಮತ್ತು ಬಿಜೆಪಿ ಹೇಳಬೇಕು.ಶಬರಿಮಲೆಗೆ ಬರುವ ಮಹಿಳೆಯರನ್ನು ಎಲ್ಲರೂಸ್ವಾಗತಿಸಬೇಕು ಎಂದಿದ್ದಾರೆ ತೃಪ್ತಿ.