ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ನ ಇಬ್ಬರು, ಟಿಡಿಪಿಯ ಒಬ್ಬ ಶಾಸಕ ಟಿಆರ್‌ಎಸ್‌ ಸೇರಲು ನಿರ್ಧಾರ

Last Updated 3 ಮಾರ್ಚ್ 2019, 18:01 IST
ಅಕ್ಷರ ಗಾತ್ರ

ಹೈದರಾಬಾದ್‌ : ತೆಲಂಗಾಣದಲ್ಲಿ ಇಬ್ಬರು ಕಾಂಗ್ರೆಸ್‌ ಶಾಸಕರು ಹಾಗೂ ಪಿಡಿಪಿಯ ಒಬ್ಬ ಶಾಸಕ ಆಡಳಿತಾರೂಢ ಟಿಆರ್‌ಎಸ್‌ ಸೇರಲು ನಿರ್ಧರಿಸಿದ್ದಾರೆ.

ಮಾರ್ಚ್‌ 12ರಂದು ವಿಧಾನ ಪರಿಷತ್‌ ಚುನಾವಣೆ ನಡೆಯಲಿದ್ದು, ಈ ಬೆಳವಣಿಗೆಯಿಂದ ಟಿಆರ್‌ಎಸ್‌ಗೆ ಮತ್ತಷ್ಟೂ ಬಲ ಬಂದಂತಾಗಿದೆ.

‘ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಾನು ಟಿಆರ್‌ಎಸ್‌ ಸೇರಲು ನಿರ್ಧರಿಸಿದ್ದೇನೆ’ ಎಂದು ಸಟ್ಟುಪಲ್ಲೆ ಕ್ಷೇತ್ರವನ್ನು ಪ್ರತಿನಿಧಿಸುವ ಟಿಡಿಪಿ ಶಾಸಕ ಸಾಂದ್ರ ವೆಂಕಟ ವೀರಯ್ಯ ಹೇಳಿದ್ದಾರೆ.

ಕ್ಷೇತ್ರಗಳ ಅಭಿವೃದ್ಧಿಯ ಜೊತೆಗೆ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಈ ನಿರ್ಧಾರಕ್ಕೆ ಬಂದಿದ್ದಾಗಿ ಕಾಂಗ್ರೆಸ್‌ ಶಾಸಕರಾದ ರೇಗಾ ಕಾಂತರಾವ್‌ (ಪಿನಪಾಕ ಕ್ಷೇತ್ರ) ಹಾಗೂ ಅಟ್ರಂ ಸಕ್ಕು(ಆಸೀಫಾಬಾದ್‌) ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT