ಹೈದರಾಬಾದ್ : ತೆಲಂಗಾಣದಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಹಾಗೂ ಪಿಡಿಪಿಯ ಒಬ್ಬ ಶಾಸಕ ಆಡಳಿತಾರೂಢ ಟಿಆರ್ಎಸ್ ಸೇರಲು ನಿರ್ಧರಿಸಿದ್ದಾರೆ.
ಮಾರ್ಚ್ 12ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಈ ಬೆಳವಣಿಗೆಯಿಂದ ಟಿಆರ್ಎಸ್ಗೆ ಮತ್ತಷ್ಟೂ ಬಲ ಬಂದಂತಾಗಿದೆ.
‘ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ನಾನು ಟಿಆರ್ಎಸ್ ಸೇರಲು ನಿರ್ಧರಿಸಿದ್ದೇನೆ’ ಎಂದು ಸಟ್ಟುಪಲ್ಲೆ ಕ್ಷೇತ್ರವನ್ನು ಪ್ರತಿನಿಧಿಸುವ ಟಿಡಿಪಿ ಶಾಸಕ ಸಾಂದ್ರ ವೆಂಕಟ ವೀರಯ್ಯ ಹೇಳಿದ್ದಾರೆ.
ಕ್ಷೇತ್ರಗಳ ಅಭಿವೃದ್ಧಿಯ ಜೊತೆಗೆ ಪರಿಶಿಷ್ಟ ಪಂಗಡದವರ ಕಲ್ಯಾಣಕ್ಕಾಗಿ ಈ ನಿರ್ಧಾರಕ್ಕೆ ಬಂದಿದ್ದಾಗಿ ಕಾಂಗ್ರೆಸ್ ಶಾಸಕರಾದ ರೇಗಾ ಕಾಂತರಾವ್ (ಪಿನಪಾಕ ಕ್ಷೇತ್ರ) ಹಾಗೂ ಅಟ್ರಂ ಸಕ್ಕು(ಆಸೀಫಾಬಾದ್) ಹೇಳಿದ್ದಾರೆ.