ಮಗು ಜೀವಂತವಾಗಿದೆ ಎಂಬುದು ಪೊಲೀಸರಿಗೆ ಮನವರಿಕೆ ಆಗುತ್ತಿದ್ದಂತೆ ಹೇಳಿಕೆ ಬದಲಿಸಿದ ವ್ಯಕ್ತಿಯು, ‘ಮಗುವಿಗೆ ಆರೋಗ್ಯ ಸಮಸ್ಯೆ ಇದೆ, ಶಸ್ತ್ರಚಿಕಿತ್ಸೆ ಮಾಡಿದರೂ ಬದುಕಲಾರದು ಎಂದು ವೈದ್ಯರು ಹೇಳಿದ್ದಾರೆ. ಅದಕ್ಕೆ ಇಲ್ಲಿ ಹೂಳಲು ಬಂದಿದ್ದೇವೆ’ ಎಂದಿದ್ದರು. ಆದರೆ ಇವರ ಉದ್ದೇಶವನ್ನು ಮನಗಂಡ ಪೊಲೀಸರು ಅಪ್ಪ–ಮಗನನ್ನು ಬಂಧಿಸಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದೆ.