ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯತಪ್ಪಿ ಬೈಕ್ ಸಹಿತ ಬಾವಿಗೆ ಬಿದ್ದ ಸವಾರ- ಎರಡು ದಿನಗಳ ನಂತರ ರಕ್ಷಣೆ

Last Updated 2 ಜೂನ್ 2019, 1:21 IST
ಅಕ್ಷರ ಗಾತ್ರ

ವಾರಂಗಲ್: ಎರಡು ದಿನಗಳ ಹಿಂದೆ ಆಯತಪ್ಪಿ ಬೈಕ್ ಸಹಿತಬಾವಿಯಲ್ಲಿ ಬಿದ್ದಿದ್ದ ದ್ವಿಚಕ್ರ ವಾಹನ ಸವಾರನನ್ನು ಸಾರ್ವಜನಿಕರು ರಕ್ಷಿಸಿರುವ ಘಟನೆ ತೆಲಂಗಾಣದಲ್ಲಿ ಶನಿವಾರ ರಾತ್ರಿನಡೆದಿದೆ.

ಇಲ್ಲಿನ ಮುಚಾರ್ಲಾ ನಾಗರಾಮ್ ಪ್ರದೇಶದಲ್ಲಿಘಟನೆ ನಡೆದಿದೆ. ವ್ಯಕ್ತಿಯೊಬ್ಬತನ್ನ ದ್ವಿಚಕ್ರವಾಹನದಲ್ಲಿ ಬಂದು ಬಾವಿಯಲ್ಲಿ ಬಿದ್ದಿದ್ದ. ಬಿದ್ದ ಕೂಡಲೆಆತಬಾವಿಯೊಳಗಿನಿಂದಲೇ ಕೂಗಿಕೊಂಡು, ಕಿರುಚಿದರೂ ಯಾರೂ ಕೇಳಿಸಿಕೊಂಡಿರಲಿಲ್ಲ. ಈತ ಬಿದ್ದ ಬಾವಿಯ ಸಮೀಪ ಜನರು ಓಡಾಟ ಅಷ್ಟೇನೂ ಇರಲಿಲ್ಲ. ಶನಿವಾರಸಾರ್ವಜನಿಕರೊಬ್ಬರು ಆ ಬಾವಿಯ ಬಳಿ ಬಂದು ಗಮನಿಸಿದಾಗ ಈತ ಬಾವಿಯಲ್ಲಿ ಬಿದ್ದಿದ್ದು ನರಳಾಡುತ್ತಿದುದು ಕಂಡು ಬಂದಿದೆ. ಕೂಡಲೆಜನರು ಜಮಾಯಿಸಿ ಹಗ್ಗಗಳನ್ನು ಬಳಸಿ ಆತನನ್ನು ಮೇಲೆತ್ತಿದ್ದಾರೆ. ನಂತರ ಬೈಕ್ ಅನ್ನೂ ಹೊರತೆಗೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT