ಇಲ್ಲಿನ ಮುಚಾರ್ಲಾ ನಾಗರಾಮ್ ಪ್ರದೇಶದಲ್ಲಿಘಟನೆ ನಡೆದಿದೆ. ವ್ಯಕ್ತಿಯೊಬ್ಬತನ್ನ ದ್ವಿಚಕ್ರವಾಹನದಲ್ಲಿ ಬಂದು ಬಾವಿಯಲ್ಲಿ ಬಿದ್ದಿದ್ದ. ಬಿದ್ದ ಕೂಡಲೆಆತಬಾವಿಯೊಳಗಿನಿಂದಲೇ ಕೂಗಿಕೊಂಡು, ಕಿರುಚಿದರೂ ಯಾರೂ ಕೇಳಿಸಿಕೊಂಡಿರಲಿಲ್ಲ. ಈತ ಬಿದ್ದ ಬಾವಿಯ ಸಮೀಪ ಜನರು ಓಡಾಟ ಅಷ್ಟೇನೂ ಇರಲಿಲ್ಲ. ಶನಿವಾರಸಾರ್ವಜನಿಕರೊಬ್ಬರು ಆ ಬಾವಿಯ ಬಳಿ ಬಂದು ಗಮನಿಸಿದಾಗ ಈತ ಬಾವಿಯಲ್ಲಿ ಬಿದ್ದಿದ್ದು ನರಳಾಡುತ್ತಿದುದು ಕಂಡು ಬಂದಿದೆ. ಕೂಡಲೆಜನರು ಜಮಾಯಿಸಿ ಹಗ್ಗಗಳನ್ನು ಬಳಸಿ ಆತನನ್ನು ಮೇಲೆತ್ತಿದ್ದಾರೆ. ನಂತರ ಬೈಕ್ ಅನ್ನೂ ಹೊರತೆಗೆದಿದ್ದಾರೆ.