ಶಿವಸೇನಾ, ಕಾಂಗ್ರೆಸ್ ಹಾಗೂ ಎನ್ಸಿಪಿಯ ತಲಾ ಇಬ್ಬರು ಶಾಸಕರು ಸಚಿವರಾಗಿದ್ದಾರೆ. ಶಿವಸೇನಾದಸುಭಾಶ್ ರಾಜಾರಾಮ್ ದೇಸಾಯಿ ಹಾಗೂಏಕನಾಥ್ ಸಾಂಬಾಜಿ ಶಿಂಧೆ ಸಚಿವರಾದರು.
ಕಾಂಗ್ರೆಸ್ ಪಕ್ಷದ ವತಿಯಿಂದಬಾಳಾಸಾಹೇಬ್ ತೋರಟ್, ನಿತಿನ್ ರಾವುತ್ ಮಂತ್ರಿಗಳಾಗಿ ಪ್ರತಿಜ್ಞಾ ವಿಧಿ ಸ್ವೀಕಾರ ಮಾಡಿದರು. ಇನ್ನು ಎನ್ಸಿಪಿಯಿಂದಜಯಂತ್ ಪಾಟೀಲ್, ಛಗನ್ ಭುಜಬಲ್ ಮಂತ್ರಿಗಳಾದರು.
ಶಿವಸೇನಾ ಹಾಗೂ ಎನ್ಸಿಪಿ ತಲಾ 15 ಸಚಿವ ಸ್ಥಾನಗಳನ್ನು ಪಡೆದರೆ, ಕಾಂಗ್ರೆಸ್ ಸ್ಫೀಕರ್ ಹುದ್ದೆ ಸೇರಿದಂತೆ 13 ಸಚಿವ ಸ್ಥಾನಗಳನ್ನು ಪಡೆಯಲಿದೆ.