ಕಾಮಗಾರಿಯ ಸಮರ್ಪಕತೆ ಬಗ್ಗೆ ಜಿಲ್ಲಾ ಪಂಚಾಯಿತಿಯ ಕಿರಿಯ ಎಂಜಿನಿಯರ್ ಸೈಫುಲ್ಲ ಅವರನ್ನು ವಿಚಾರಿಸಿದಾಗ, ‘ರಸ್ತೆ ಡಾಂಬರೀಕರಣವು ಕ್ರಿಯಾಯೋಜನೆಯ ಗುಣಮಟ್ಟದಲ್ಲಿ ಆಗಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ.ಕಾಮಗಾರಿಯ ಬಗ್ಗೆ ಗ್ರಾಮಸ್ಥರಾದ ಶ್ರೀನಿವಾಸ, ಹಸನಬ್ಬ, ಅಬೂಬಕರ್ ಮತ್ತು ಮಹಮದ್ ಅವರು ತೃಪ್ತಿ ವ್ಯಕ್ತಪಡಿಸಿ, ಗುಣಮಟ್ಟದ ಬಗ್ಗೆ ತಕರಾರು ಎತ್ತಿರುವುದು ಸಲ್ಲ ಎಂದಿದ್ದಾರೆ.