ಚಿಕ್ಕಮಗಳೂರು: ತಾಲ್ಲೂಕಿನ ಮಲ್ಲೇನಹಳ್ಳಿಯ ಕುಮಾರಗಿರಿಯ ಸುಬ್ರಹ್ಮಣ್ಯಸ್ವಾಮಿ ಪಂಗುನಿ ಉತ್ತಿರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.ಅಂಗವಾಗಿ ಸುಬ್ರಮಣ್ಯಸ್ವಾಮಿ ಮೂರ್ತಿಗೆ ಅಭಿಷೇಕ, ವಿಶೇಷ ಅಲಂಕಾರ, ಕಾವಡಿ ಸಮರ್ಪಣೆ, ಮುರುಗನ್, ವಳ್ಳಿ, ದೇವಸೇನಾ ವಿಗ್ರಹಗಳ ಕಲ್ಯಾಣೋತ್ಸವ ನೆರವೇರಿತು. ಕುಮಾರಗಿರಿಯ ಮುಖ್ಯದ್ವಾರ ಮತ್ತು ಸುಬ್ರಮಣ್ಯಸ್ವಾಮಿ ದೇಗುಲ ತಳಿರು ತೋರಣ, ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುತ್ತಿತ್ತು.