ಎಲ್ಲ ಧರ್ಮಗಳು ಹಾಗೂ ಪಂಥಗಳ ಉತ್ತಮ ಅಂಶಗಳು, ಅಭಿವೃದ್ಧಿಹೊಂದಿದ ದೇಶಗಳ ನಾಗರಿಕ ಸಂಹಿತೆ, ಅಂತರರಾಷ್ಟ್ರೀಯ ಸಮಾವೇಶಗಳ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು 3 ತಿಂಗಳ ಒಳಗೆ ಸಮಗ್ರ ಸ್ವರೂಪದ ಕರಡು ಸಿದ್ಧಪಡಿಸುವಂತೆ ಕಾನೂನು ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದೆ. ಸಾರ್ವಜನಿಕ ಚರ್ಚೆ ಹಾಗೂ ಪ್ರತಿಕ್ರಿಯೆಗಳಿಗೆ ಮುಕ್ತ ಅವಕಾಶ ಇರಬೇಕು ಎಂದು ಅರ್ಜಿದಾರರಾದ ವಕೀಲ ಅಭಿನವ್ ಬೇರಿ ಮನವಿ ಮಾಡಿದ್ದಾರೆ. ಭ್ರಾತೃತ್ವ, ಏಕತೆ ಹಾಗೂ ರಾಷ್ಟ್ರೀಯ ಸಮಗ್ರೆಗಾಗಿ ಏಕರೂಪದ ನಾಗರಿಕ ಸಂಹಿತೆ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.