ಕಲ್ಲುಗಳನ್ನು ಎಸೆದು, ಬಸ್ಸು, ಪೊಲೀಸ್ ವಾಹನ ಮತ್ತಿತರ ಸಾರ್ವಜನಿಕ ಆಸ್ತಿಗೆ ಹಾನಿ ಉಂಟು ಮಾಡಿದವರನ್ನು ವಿಡಿಯೊ ಹಾಗೂ ಫೋಟೋಗಳ ಮೂಲಕ ಗುರುತಿಸಲಾಗಿದೆ. ಉತ್ತರಿಸಲು ಒಂದು ವಾರ ಕಾಲಾವಕಾಶ ನೀಡಲಾಗಿದೆ. ಇಷ್ಟೇ ಅಲ್ಲದೆ, ಯಾವ ಇಲಾಖೆಗಳಲ್ಲಿ ಎಷ್ಟು ಆಸ್ತಿಪಾಸ್ತಿ ನಷ್ಟವಾಗಿದೆ ಎಂಬ ಬಗ್ಗೆ ವರದಿ ನೀಡುವಂತೆ ಸಾರಿಗೆ, ಲೋಕೋಪಯೋಗಿ, ನಗರಪಾಲಿಕೆ ಮುಂತಾದ ಸರಕಾರಿ ಇಲಾಖೆಗಳನ್ನು ಕೇಳಿಕೊಂಡಿದ್ದೇವೆ. ಈ ಕುರಿತು ವರದಿ ಕೇಳಲಾಗಿದೆ ಎಂದು ರಾಂಪುರ ಜಿಲ್ಲಾಧಿಕಾರಿ ಆಂಜನೇಯ ಕುಮಾರ್ ಸಿಂಗ್ ಹೇಳಿದ್ದಾರೆ.