ಹೈದರಾಬಾದ್: ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಇಲ್ಲಿನ ಉರ್ದು ಲೇಖಕ ಮುಜ್ತಬ ಹುಸೇನ್ ಅವರು ಸರ್ಕಾರ ನೀಡಿದ್ದ ಪದ್ಮಶ್ರೀ ಪುರಸ್ಕಾರವನ್ನು ಮರಳಿಸಲು ನಿರ್ಧರಿಸಿದ್ದಾರೆ.
‘ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಲೇ ಇವೆ. ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಗಾಂಧಿ, ನೆಹರೂ, ಪಟೇಲ್ ಮುಂತಾದ ನಾಯಕರು ಕಟ್ಟಿದ ಪ್ರಜಾತಂತ್ರ ವ್ಯವಸ್ಥೆಯನ್ನು ಒಡೆದುಹಾಕಲಾಗಿದೆ. ನನ್ನ ಜನರ ಧ್ವನಿ ಅಡಗಿಸಲಾಗುತ್ತಿದೆ. ಇದನ್ನು ಖಂಡಿಸಿ ಪ್ರಶಸ್ತಿ ಮರಳಿಸಲು ನಿರ್ಧರಿಸಿದ್ದೇನೆ’ ಎಂದು ಹೇಳಿದ್ದಾರೆ.