ಚೆನ್ನೈ: ತಮಿಳುನಾಡಿನಿಂದ ರಾಜ್ಯಸಭೆಗೆ ನಡೆಯುವ ದ್ವೈವಾರ್ಷಿಕ ಚುನಾವಣೆಗೆ ಎಂಡಿಎಂಕೆ ಮುಖ್ಯಸ್ಥ ವೈಕೊ ಅವರು ಸಲ್ಲಿಸಿದ್ದ ನಾಮಪತ್ರ ಅಂಗೀಕಾರವಾಗಿದೆ.
2009ರಲ್ಲಿ ಆಗಿನ ಡಿಎಂಕೆ ಸರ್ಕಾರ ದಾಖಲಿಸಿದ್ದ ದೇಶದ್ರೋಹದ ಪ್ರಕರಣದಲ್ಲಿ ವೈಕೊ ಅವರಿಗೆ ನ್ಯಾಯಾಲಯ ಒಂದು ವರ್ಷದ ಸಜೆ ವಿಧಿಸಿತ್ತು. ಇದೇ ಕಾರಣದಿಂದ ಅವರ ನಾಮಪತ್ರ ಅಂಗೀಕಾರ ಆಗುವುದರ ಬಗ್ಗೆ ಶಂಕೆ ಮೂಡಿತ್ತು.