ಮುಂಬೈ: ಕೆಲವು ಮಸೂದೆ ಅಂಗೀಕಾರಕ್ಕೆ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಉಂಟಾಗಿರುವ ಬಿಕ್ಕಟ್ಟಿನ ಬಗ್ಗೆ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಮೇಲ್ಮನೆಯ ‘ಕೆಲವು ಗುಂಪುಗಳ’ ವರ್ತನೆಯಿಂದ ಬೇಸರವಾಗಿದ್ದು, ಸಂಸತ್ತಿನ ಯಶಸ್ವಿ ಕಾರ್ಯ ನಿರ್ವಹಣೆಗೆ ಆದರ್ಶ ನಡವಳಿಕೆ ಪ್ರದರ್ಶಿಸುವಂತೆ ಸಂಸದರಿಗೆ ಅವರು ಸಲಹೆ ನೀಡಿದ್ದಾರೆ.
‘ನಿಯಮಗಳಿಗೆ ಗೌರವ ಕೊಡದಿರುವುದು, ಸಂಪ್ರದಾಯಗಳನ್ನು ಮೀರುವುದು ಹಾಗೂ ಸಭಾಪತಿಯ ಪೀಠದ ಎದುರು ಗದ್ದಲ ಎಬ್ಬಿಸುವ ವರ್ತನೆಗಳು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.ಗುರುವಾರ ಆರ್ಟಿಐ ತಿದ್ದುಪಡಿ ಮಸೂದೆ ಕುರಿತ ಚರ್ಚೆಯಲ್ಲಿ ಹೈಡ್ರಾಮಾ ನಡೆದಿತ್ತು.
ಬಿಜೆಪಿ ಮಹಿಳಾ ಸಂಸದರೊಬ್ಬರ ವಿರುದ್ಧ ಎಸ್ಪಿ ಸಂಸದ ಅಜಂ ಖಾನ್ ನೀಡಿದ ಹೇಳಿಕೆಯನ್ನು ಸಹ ವೆಂಕಯ್ಯ ನಾಯ್ಡು ಖಂಡಿಸಿದರು. ಖಾನ್ ಹೇಳಿಕೆಯು ಉಭಯ ಸದನಗಳಲ್ಲಿ ಕೋಲಾಹಲ ಸೃಷ್ಟಿಸಿತ್ತು.