ನವದೆಹಲಿ (ಪಿಟಿಐ): ದೇಶವನ್ನು ಅಪೌಷ್ಟಿಕತೆಯಿಂದ ಮುಕ್ತ ಮಾಡುವ ಉದ್ದೇಶದೊಂದಿಗೆ ಆರಂಭಿಸಲಾಗಿರುವ ಯೋಜನೆಯ ಮಹತ್ವ ಸಾರುವ ‘ಭಾರತೀಯ ಪೋಷಣೆ ಗೀತೆ’ಯನ್ನು (ಭಾರತೀಯ ಪೋಷಣ್ ಆ್ಯಂಥೆಮ್) ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮಂಗಳವಾರ ಇಲ್ಲಿ ಲೋಕಾರ್ಪಣೆ ಮಾಡಿದರು.
ಬಾಲಿವುಡ್ನ ಖ್ಯಾತ ಗೀತ ರಚನಕಾರ ಪ್ರಸೂನ್ ಜೋಶಿ ಬರೆದಿರುವ ಗೀತೆಯನ್ನು ಗಾಯಕ ಶಂಕರ್ ಮಹಾದೇವನ್ ಹಾಡಿದ್ದಾರೆ.