ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಣ ಪತ್ರದಲ್ಲಿ ಉಜ್ವಲ ಭವಿಷ್ಯಕ್ಕೆ ಪ್ರಾರ್ಥಿಸಿದ ಗ್ರಾಮ ಪಂಚಾಯ್ತಿ ಮುಖ್ಯಸ್ಥ

Last Updated 26 ಫೆಬ್ರುವರಿ 2020, 10:37 IST
ಅಕ್ಷರ ಗಾತ್ರ

ಉತ್ತರ ಪ್ರದೇಶ:ಯಾರಾದರೂಮೃತರಿಗೆ ಉತ್ತಮ ಭವಿಷ್ಯ ಹಾರೈಸುವ ಘಟನೆಕೇಳಿದ್ದೀರಾ? ಉತ್ತರಪ್ರದೇಶದ ಉನ್ನಾವೋ ಜಲ್ಲೆಯಲ್ಲಿ ಗ್ರಾಮ ಪಂಚಾಯತ್‌ ಮುಖ್ಯಸ್ಥರೊಬ್ಬರು ಮರಣ ಪ್ರಮಾಣ ಪತ್ರದಲ್ಲಿ ಮೃತರಿಗೆ ಉತ್ತಮ ಭವಿಷ್ಯಕ್ಕಾಗಿಹಾರೈಸಿದಅಪರೂಪದ ಘಟನೆ ನಡೆದಿದೆ.

ದೀರ್ಘಕಾಲಿಕ ಅನಾರೋಗ್ಯದಿಂದಬಳಲುತ್ತಿದ್ದಲಕ್ಮೀಶಂಕರ್ಎನ್ನುವವರು ಇಲ್ಲಿನ ಸಿರ್ವರಿಯಾಗ್ರಾಮದಲ್ಲಿ ಜನವರಿ 22ರಂದು ಮೃತಪಟ್ಟಿದ್ದರು.

ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆತಂದೆಯ ಮರಣ ಪ್ರಮಾಣ ಪತ್ರ ನೀಡುವಂತೆಮಗ ಗ್ರಾಮ ಪಂಚಾಯತಿಮುಖ್ಯಸ್ಥ ಬಾಬುಲ್ ಅವರನ್ನು ಕೇಳಿಕೊಂಡಿದ್ದರು.

ಅದರಂತೆ ಮರಣ ಪ್ರಮಾಣ ಪತ್ರ ನೀಡಿದ್ದು, ಅದರಲ್ಲಿ ಮೃತರ ಉತ್ತಮ ಭವಿಷ್ಯಕ್ಕಾಗಿಶುಭಹಾರೈಸಿದ್ದಾರೆ.ಮರಣ ಪ್ರಮಾಣ ಪತ್ರದಲ್ಲಿ ‘ನಾನು ಅವರ ಉಜ್ವಲ ಭವಿಷ್ಯಕ್ಕಾಗಿಪ್ರಾರ್ಥಿಸುತ್ತೇನೆ(ಮೇ ಇನ್‌ಕೆ ಉಜ್ವಲ್ಕಿಕಾಮನಕರ್ತಾಹೂ) ಎಂದು ಬರೆದಿದ್ದಾರೆ.

ಮರಣ ಪ್ರಮಾಣ ಪತ್ರವು ಸಾಮಾಜಿಕಜಾಲತಾಣಗಳಲ್ಲಿವೈರಲ್ಅಗಿದ್ದು, ತಮ್ಮ ತಪ್ಪಿಗಾಗಿಕ್ಷಮೆಯಾಚಿಸಿರುವಅವರು ಹೊಸ ಮರಣ ಪ್ರಮಾಣ ಪತ್ರವನ್ನು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT