ಸಂಪ್ರದಾಯದ ಪ್ರಕಾರ, 140 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯದ ದೇವಿಯನ್ನು ಪ್ರತಿವರ್ಷವೂ ಇದೇ ರೀತಿಯಲ್ಲಿ ಅಲಂಕಾರ ಮಾಡಲಾಗುತ್ತದೆ. ಇದಕ್ಕೆ ಭಾರತ ಹಾಗೂ ವಿದೇಶಿ ನೋಟುಗಳನ್ನು ಬಳಸಲಾಗುತ್ತದೆ. ದೇವಿಯ ಪೂಜೆಗೆ ಹಣ, ಬಂಗಾರ ನೀಡುವುದು ದೊಡ್ಡ ಅದೃಷ್ಟ ಎಂದು ಭಕ್ತರು ನಂಬಿದ್ದಾರೆ. ಇದೆಲ್ಲವೂ ಜನರ ಕೊಡುಗೆ. ಪೂಜೆಯಾದ ಬಳಿಕ ಅವರವರ ಹಣವನ್ನು ಹಿಂತಿರುಗಿಸಲಾಗುತ್ತದೆ. ಈ ಹಣ ದೇವಾಲಯದ ಟ್ರಸ್ಟ್ಗೆ ಸೇರುವುದಿಲ್ಲ ಎಂದು ದೇವಾಲಯ ಸಂಘಟನಾ ಸಮಿತಿಯ ಮುಖ್ಯಸ್ಥ ಕೊಲ್ಲೂರು ವೆಂಕಟೇಶ್ವರ ರಾವ್ ತಿಳಿಸಿದ್ದಾರೆ.