ನಿನ್ನೆ ನಡೆದ ಸಭೆಯಲ್ಲಿ ಅಜಿತ್ ಪವಾರ್ ಭಾಗವಹಿಸಿದ್ದರು ನಂತರ ವಕೀಲರ ಜೊತೆ ಮಾತನಾಡಬೇಕು ಎಂದು ಮಧ್ಯದಲ್ಲೆ ಹೋದರು, ಅವರ ನಡವಳಿಕೆಯೂ ವಿಚಿತ್ರವಾಗಿತ್ತು. ಅವರಿಗೆ ಫೋನ್ ಮಾಡಿದಾಗ ಸ್ವೀಚ್ ಆಫ್ ಬರುತ್ತಿತ್ತು. ನಮಗೆ ಈಗ ತಿಳಿಯಿತು ಅವರು ಯಾವ ವಕೀಲರನ್ನು ನೋಡಲು ಹೋಗಿದ್ದರು ಎಂದು. ಅಜಿತ್ ಪವಾರ್ ಮಹಾರಾಷ್ಟ್ರ ಜನರ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಸಂಜಯ್ ರಾವುತ್ ಕಿಡಿಕಾರಿದ್ದಾರೆ.