‘ಹಲ್ಲೆ ಬಳಿಕ ಕ್ಯಾಬ್ ಚಾಲಕ, ನನ್ನ ಸ್ನೇಹಿತೆ ಹಾಗೂ ನನ್ನನ್ನು ಮನೆಗೆ ತಲುಪಿ ಸಲುವಾಹನ ಓಡಿಸಲು ಮುಂದಾಗುತ್ತಿದ್ದಂತೆ ಮತ್ತೆ ಯುವಕರ ಗುಂಪು ಪ್ರತ್ಯಕ್ಷವಾಯಿತು. ಹಲ್ಲೆ ನಡೆಸಿದ ದೃಶ್ಯದ ವಿಡಿಯೊ ಅಳಿಸಿ ಹಾಕಲು ನನ್ನ ಮೊಬೈಲ್ ಕಸಿದುಕೊಳ್ಳಲು ಮುಂದಾಯಿತು. ನನ್ನನ್ನು ಎಳೆದಾಡಿ, ನಿಂದಿಸಿದರು. ನನ್ನ ತಂದೆಗೆ ಹಾಗೂ ಸಹೋದರಿಗೆ ದೂರವಾಣಿ ಕರೆ ಮಾಡಲು ಮುಂದಾಗುತ್ತಿದ್ದಂತೆ ಯುವಕರು ಪರಾರಿಯಾದರು. ಆದರೆ, ಸಮೀಪದ ಚಾರು ಮಾರ್ಕೆಟ್ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದರು’ ಎಂದು ಅವರು ಹೇಳಿದ್ದಾರೆ.