ಮುಂಬೈ:ನಾವು ತಾಯಿ ನಾಡು(‘ಮದರ್ ಇಂಡಿಯಾ) ಎಂದು ಕರೆಯುತ್ತೇವೆ. ಬದಲಿಗೆ, ತಂದೆ ನಾಡು(’ಫಾದರ್ ಇಂಡಿಯಾ’) ಎಂದು ಕರೆಯುವುದಿಲ್ಲ. ಅದು ನಾವು ಮಹಿಳೆಗೆ ನೀಡುವ ಗೌರವ ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಬಣ್ಣಿಸಿದರು.
ಮಹಾರಾಷ್ಟ್ರ ರಾಜ್ಯ ಚುನಾವಣಾ ಆಯೋಗ ಆಯೋಜಿಸಿದ್ದ 1ನೇ ಪ್ರಜಾಪ್ರಭುತ್ವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶನಿವಾರ ಅವರು ಮಾತನಾಡಿದರು.
ಜನಸಂಖ್ಯೆಯಲ್ಲಿಶೇಕಡಾ 50ರಷ್ಟು ಮಹಿಳೆಯರಿದ್ದಾರೆ. ಮಹಿಳೆಯರು ಸಂಸತ್ನಲ್ಲಿಯೂ ಮೀಸಲಾತಿ ಪಡೆಯಬೇಕು ಮತ್ತು ಮೀಸಲಾತಿ ನೀಡಿದ ಬಳಿಕ ಅವರಿಗೆ ಹಣಕಾಸು ನೆರವು ಹಾಗೂ ಕಾರ್ಯಕಾರಿ ಜವಾಬ್ದಾರಿಗಳನ್ನೂ ನೀಡಬೇಕು ಎಂದು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಪಡಣವೀಸ್ ಅವರೂ ಇದ್ದರು.