ಪಟ್ನಾ: ‘ಕೇಂದ್ರ ಸರ್ಕಾರವು ಗುಂಡು ಹಾರಾಟದ ಯುದ್ಧದಲ್ಲಿ (ಬ್ಯಾಟಲ್ ಆಫ್ ಬುಲೆಟ್) ಗೆದ್ದಿದೆ, ಈಗ ಮತ ಸಮರದಲ್ಲಿ (ಬ್ಯಾಟಲ್ ಆಫ್ ಬ್ಯಾಲೆಟ್) ಎನ್ಡಿಎ ಗೆಲ್ಲಬೇಕಿದೆ. ನಮಗೆ ಬುದ್ಧ (ಶಾಂತಿ) ಬೇಕು, ಅಗತ್ಯ ಬಿದ್ದರೆ ನಾವು ಯುದ್ಧಕ್ಕೂ ಸಿದ್ಧ. ನಮಗೆ ಬುದ್ಧ ಮತ್ತು ಯುದ್ಧ ಎರಡೂ ಬೇಕಿದೆ’ ಎಂದು ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.