ಕೋಲ್ಕತ್ತ: ಕರ್ನಾಟಕ ತಂಡ ಸಂತೋಷ್ ಟ್ರೋಫಿ ಫುಟ್ಬಾಲ್ ಪಂದ್ಯದಲ್ಲಿ ಸೋಮವಾರ ಪಂಜಾಬ್ ಎದುರು ಸೋತಿದೆ.
‘ಬಿ’ ಗುಂಪಿನ ಪಂದ್ಯದಲ್ಲಿ ಪಂಜಾಬ್ 2–1 ಗೋಲುಗಳಿಂದ ಕರ್ನಾಟಕಕ್ಕೆ ಸೋಲುಣಿಸಿದೆ. ಎರಡೂ ತಂಡಗಳು ಆರು ಪಾಯಿಂಟ್ಸ್ ಹೊಂದಿ ರುವ ಕಾರಣ ಸೆಮಿಫೈನಲ್ ತಲುಪುವ ತಂಡ ಯಾವುದು ಎಂಬ ಕುತೂಹಲ ಇನ್ನೂ ಉಳಿದುಕೊಂಡಿದೆ.
ಹಿಂದಿನ ಪಂದ್ಯದಲ್ಲಿ ಮಿಜೋರಾಂ ಎದುರು ಪಂಜಾಬ್ ಸೋಲು ಅನು ಭವಿಸಿತ್ತು. ಈ ಪಂದ್ಯದ ಏಳನೇ ನಿಮಿ ಷದಲ್ಲಿ ಕರ್ನಾಟಕ ತಂಡದ ರಾಜೇಶ್ ಗೋಲು ದಾಖಲಿಸಿದರು. ಆ ಬಳಿಕ ಪಂಜಾಬ್ ತಿರುಗೇಟಿ ನೀಡಿತು. ಜಿತೇಂದರ್ ಸಿಂಗ್ (18ನೇ ನಿ.) ಹಾಗೂ ಬಲತೇಜ್ ಸಿಂಗ್ (26ನೇ ನಿ.) ಗೋಲು ತಂದುಕೊಟ್ಟರು.