ಇಲ್ಲಿನ ಹೌರಾ ಜಿಲ್ಲೆಯ ಸಲ್ಖಿಯಾ ಪ್ರದೇಶದಲ್ಲಿ ಅಲ್ಲಿನ ಸ್ಥಳೀಯರು 30ರ ಹರೆಯದ ವ್ಯಕ್ತಿಯನ್ನು ಮರಕ್ಕೆ ಕಟ್ಟಿ ಥಳಿಸಿದ ಪರಿಣಾಮ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿಗೀಡಾದ ಯುವಕ ಕಳ್ಳ ಎಂದು ಶಂಕಿಸಲಾಗಿತ್ತು.ತಪ್ಪಿತಸ್ಥರನ್ನು ಪತ್ತೆ ಹಚ್ಚಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಪ್ರಕರಣದಲ್ಲಿ ವ್ಯಕ್ತಿಯೊಬ್ಬನನ್ನು ವಿಚಾರಣೆಗೊಳಪಡಿಸಲಾಗಿದೆ ಎಂದು ಹೌರಾ ಸಿಟಿ ಪೊಲೀಸ್ ಡಿಸಿಪಿ (ಉತ್ತರ) ವೈ. ರಘುಬಂಶಿ ಹೇಳಿದ್ದಾರೆ.