ಬೋಗಿಬೀಲ್ ಸೇತುವೆ ಯೋಜನೆ ಪೂರ್ಣಗೊಳಿಸಲು ವಿಳಂಬವಾಗಿರುವ ಬಗ್ಗೆ ಪ್ರಶ್ನೆ ಕೇಳಿದಾಗ, ನಾನು ವಿಭಿನ್ನ ಅಂತ ಅನಿಸುವುದು ಇಲ್ಲಿಯೇ. ನಾನು 13 ತಿಂಗಳಲ್ಲಿ ಹಾಸನ-ಮೈಸೂರು ಯೋಜನೆ ಪೂರ್ಣಗೊಳಿಸಿದ್ದೆ.ಎರಡು ಸೇತುವೆಗಳ ಯೋಜನೆಯನ್ನು ನಿಗದಿತ ಸಮಯದಲ್ಲಿ ಮುಗಿಸಿದ್ದೆ.ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಅನಘವಾಡಿ ಸೇತುವೆ, ಕೃಷ್ಣ ನದಿಗೆ ನಿರ್ಮಿಸಲಾದ ಸೇತುವೆಯನ್ನು ಹೋಗಿ ನೋಡಿ. ಮುಂಬೈ ಕರ್ನಾಟಕ ಪ್ರದೇಶದ ಕೆಲವು ಜನರು ದೇವೇಗೌಡರು ಉತ್ತರ ಕರ್ನಾಟಕದ ಜನರಿಗೆ ಏನೂ ಮಾಡಿಲ್ಲ ಅಂತಾರೆ. ಹೋಗಿ ನೋಡಿ ಎಂದಿದ್ದಾರೆ ಗೌಡರು.