ಸಿಬ್ಬಂದಿಯು ಕೆಲಸ ಮಾಡುತ್ತಿರುವ ಕಟ್ಟಡದ ಛಾವಣಿಯಲ್ಲಿದ್ದ ರಂಧ್ರಗಳನ್ನು ಈಗಾಗಲೇ ಮುಚ್ಚಲಾಗಿದೆ ಮತ್ತು ಕಟ್ಟಡಕ್ಕೆ ಆಧಾರಾವಾಗಿ ಕೊಠಡಿಯ ಮಧ್ಯಭಾಗದಲ್ಲಿ ಕಂಬ ನಿಲ್ಲಿಸಲಾಗಿದೆ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹೆಲ್ಮೆಟ್ ಹಾಕಿಕೊಂಡೇ ಕೆಲಸ ಮಾಡುತ್ತಿದ್ದೇವೆ. ಈ ಕುರಿತು ಹಲವು ಬಾರಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾರೊಬ್ಬರೂ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಕಟ್ಟಡವನ್ನು ದುರಸ್ತಿಗೊಳಿಸಲು ಕೆಲವರ ಪ್ರಾಣ ಹೋಗಲಿ ಎಂದು ಅವರು ಕಾಯುತ್ತಿದ್ದಾರೆ ಎಂದು ಉದ್ಯೋಗಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.