ಹಿಸಾರ್ (ಹರಿಯಾಣ): ಬೆಂಗಳೂರಿನಲ್ಲಿ ಏರೊ ಇಂಡಿಯಾ ಪ್ರದರ್ಶನದ ಪೂರ್ವಭಾವಿ ತಾಲೀಮಿನ ವೇಳೆ ಸಂಭವಿಸಿದ ‘ಸೂರ್ಯಕಿರಣ’ವಿಮಾನ ದುರಂತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿ ಅವರ ಅಂತ್ಯಸಂಸ್ಕಾರ ಗುರುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಸಾಹಿಲ್ ಪುತ್ರ, ಐದು ವರ್ಷದ ರಿಯಾನ್ ಚಿತೆಗೆ ಅಗ್ನಿಸ್ಪರ್ಶ ಮಾಡಿದ.