ಶಿವಮೊಗ್ಗ: ‘ದೇಶದಲ್ಲಿ ಒಂದು ಕಡೆ ಪ್ರಶ್ನೆಪತ್ರಿಕೆ ಸೋರಿಕೆ, ಮತ್ತೊಂದು ಕಡೆ ಚುನಾವಣಾ ಆಯೋಗದಿಂದ ಮಾಹಿತಿ ಸೋರಿಕೆಯಾಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇದು ಮೋದಿ ಕಾಲ’ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಮಂಗಳವಾರ ನಡೆದ ಜನಾಶೀರ್ವಾದ ಯಾತ್ರೆಯಲ್ಲಿ ಅವರು ಮಾತನಾಡಿದರು.
‘ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಎಚ್ಎಎಲ್ ಜತೆ ಆಗಬೇಕಿತ್ತು. ಅದನ್ನು ಮೋದಿ ಅವರು ತಮ್ಮ ಮಿತ್ರರಿಗೆ ಮೂರು ಪಟ್ಟು ಹೆಚ್ಚು ಮೊತ್ತಕ್ಕೆ ಖರೀದಿಗಾಗಿ ಕೊಟ್ಟಿದ್ದಾರೆ’ ಎಂದು ಹೇಳಿದರು.
ಮೋದಿ ಅವರಿಗೆ ‘ಅರ್ಧ ಚೆಡ್ಡಿ ತೊಟ್ಟು, ಕಡ್ಡಿ ಹಿಡಿದು ಸುಳ್ಳು ಹೇಳೋದನ್ನ ಆರ್ಎಸ್ಎಸ್ ಹೇಳಿಕೊಟ್ಟಿದೆ’ ಎಂದು ವ್ಯಂಗ್ಯವಾಡಿದರು.