ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ| ಮದುವೆಗೆ ತಿರಸ್ಕರಿಸಿದ್ದೇ ಕೊಲೆಗೆ ಕಾರಣ

ಮಹಿಳಾ ಪೊಲೀಸ್‌ ಅಧಿಕಾರಿ ಜೀವಂತ ದಹನ
Last Updated 16 ಜೂನ್ 2019, 20:25 IST
ಅಕ್ಷರ ಗಾತ್ರ

ತಿರುವನಂತಪುರ: ಮದುವೆಯಾಗುವಂತೆ ಪದೇಪದೇ ಮಾಡಿದ ಮನವಿಯನ್ನು ತಿರಸ್ಕರಿಸಿದ್ದೇ, ಅಲಪ್ಪುಳ ಜಿಲ್ಲೆಯ ಮಾವೇಲಿಕ್ಕರ ಠಾಣೆಯ ಪೊಲೀಸ್‌ ಮಹಿಳಾ ಕಾನ್‌ಸ್ಟೆಬಲ್‌ಸೌಮ್ಯಾ ಪುಷ್ಕರಣ್‌ ಅವರನ್ನು ಮಚ್ಚಿನಿಂದ ಕೊಚ್ಚಿ, ಜೀವಂತವಾಗಿ ದಹಿಸಲು ಕಾರಣ ಎಂದು ತಿಳಿದುಬಂದಿದೆ.

ಎರ್ನಾಕುಲಂ ಜಿಲ್ಲೆಯ ಆಲುವಾದಲ್ಲಿನ ಸಂಚಾರ ಠಾಣೆಯಲ್ಲಿ ಪೊಲೀಸ್‌ ಅಧಿಕಾರಿಯಾಗಿರುವ ಅಜಾಜ್‌ ಈ ಕೃತ್ಯ ಎಸಗಿದ್ದು, ಸುಟ್ಟಗಾಯಗಳಿಂದಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

‘ಮೃತ ಸೌಮ್ಯಾ, ಅಜಾಜ್‌ ಈ ಮೊದಲು ಒಂದೇ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಆಗ ಅಜಾಜ್‌ನಿಂದ ಸೌಮ್ಯಾ ₹ 1.5 ಲಕ್ಷ ಸಾಲ ಪಡೆದಿದ್ದರು. ನಂತರ ಸಾಲದ ಹಣವನ್ನು ಮರಳಿ ಕೊಡಲು ಹೋದಾಗ ಅಜಾಜ್‌ ಅದನ್ನು ತಿರಸ್ಕರಿಸಿದ್ದ. ಬದಲಾಗಿ ತನ್ನನ್ನು ಮದುವೆಯಾಗುವಂತೆ ಆಕೆಗೆ ಒತ್ತಾಯಿಸುತ್ತಿದ್ದ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT