ತಿರುವನಂತಪುರ: ಮದುವೆಯಾಗುವಂತೆ ಪದೇಪದೇ ಮಾಡಿದ ಮನವಿಯನ್ನು ತಿರಸ್ಕರಿಸಿದ್ದೇ, ಅಲಪ್ಪುಳ ಜಿಲ್ಲೆಯ ಮಾವೇಲಿಕ್ಕರ ಠಾಣೆಯ ಪೊಲೀಸ್ ಮಹಿಳಾ ಕಾನ್ಸ್ಟೆಬಲ್ಸೌಮ್ಯಾ ಪುಷ್ಕರಣ್ ಅವರನ್ನು ಮಚ್ಚಿನಿಂದ ಕೊಚ್ಚಿ, ಜೀವಂತವಾಗಿ ದಹಿಸಲು ಕಾರಣ ಎಂದು ತಿಳಿದುಬಂದಿದೆ.
ಎರ್ನಾಕುಲಂ ಜಿಲ್ಲೆಯ ಆಲುವಾದಲ್ಲಿನ ಸಂಚಾರ ಠಾಣೆಯಲ್ಲಿ ಪೊಲೀಸ್ ಅಧಿಕಾರಿಯಾಗಿರುವ ಅಜಾಜ್ ಈ ಕೃತ್ಯ ಎಸಗಿದ್ದು, ಸುಟ್ಟಗಾಯಗಳಿಂದಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
‘ಮೃತ ಸೌಮ್ಯಾ, ಅಜಾಜ್ ಈ ಮೊದಲು ಒಂದೇ ಠಾಣೆಯಲ್ಲಿ ಕರ್ತವ್ಯದಲ್ಲಿದ್ದರು. ಆಗ ಅಜಾಜ್ನಿಂದ ಸೌಮ್ಯಾ ₹ 1.5 ಲಕ್ಷ ಸಾಲ ಪಡೆದಿದ್ದರು. ನಂತರ ಸಾಲದ ಹಣವನ್ನು ಮರಳಿ ಕೊಡಲು ಹೋದಾಗ ಅಜಾಜ್ ಅದನ್ನು ತಿರಸ್ಕರಿಸಿದ್ದ. ಬದಲಾಗಿ ತನ್ನನ್ನು ಮದುವೆಯಾಗುವಂತೆ ಆಕೆಗೆ ಒತ್ತಾಯಿಸುತ್ತಿದ್ದ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.