ಪಟ್ನಾ: ನರೇಂದ್ರ ಮೋದಿ, ನಿತೀಶ್ ಕುಮಾರ್ ಮತ್ತು ಪಾಸ್ವಾನ್ ತಿಂಗಳುಗಳಿಂದ ಶ್ರಮವಹಿಸಿಸರ್ಕಾರಿ ಸೌಲಭ್ಯಗಳನ್ನು ಬಳಸಿ ಗಾಂಧಿ ಮೈದಾನದಲ್ಲಿ ಅಷ್ಟೊಂದು ಜನ ಸೇರಿಸಿದ್ದಾರೆ.ನಾವು ಪಾನ್(ಬೀಡಾ) ತಿನ್ನುವುದಕ್ಕೆ ಗಾಡಿ ನಿಲ್ಲಿಸಿ ಪಾನ್ ಅಂಗಡಿಗೆ ಹೋದರೆ ಇಷ್ಟು ಜನ ಅಲ್ಲಿಯೂ ಸೇರುತ್ತಾರೆ. ಜನರೇ ನೀವು ಅಲ್ಲಿಗೆ ಹೋಗಿ ಕ್ಯಾಮೆರಾ ಜೂಮ್ ಮಾಡಿ ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಟ್ವೀಟ್ ಮಾಡಿದ್ದಾರೆ.