ಮುಜಾಫರ್ನಗರ: ಇಲ್ಲಿನ ಸ್ಮಶಾನಯೊಂದರಲ್ಲಿ ಹೂಳಲಾಗಿದ್ದ ಯುವಕನ ಮೃತದೇಹವನ್ನು ಶುಕ್ರವಾರ ಹೊರತೆಗೆಯಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದರು.
ಯುವಕ ಮುಸ್ಲಿಂ ಧರ್ಮಕ್ಕೆ ಸೇರಿದವನು ಎಂದು ತಪ್ಪಾಗಿ ತಿಳಿದು ಮೃತದೇಹವನ್ನು ಹೂಳಲಾಗಿತ್ತು. ಆದರೆ, ಆತ ಹಿಂದೂ ಎಂದು ಖಚಿತಗೊಂಡ ಬಳಿಕ ಸುಡಲಾಯಿತು ಎಂದು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಸುರ್ಜಿತ್ ಕುಮಾರ್ ತಿಳಿಸಿದರು.
ಯುವಕನನ್ನು ಆತನ ಮೂವರು ಸ್ನೇಹಿತರು ಜೂನ್ 17 ರಂದು ಕೊಲೆ ಮಾಡಿ, ಯಮುನಾ ನದಿಗೆ ಎಸೆದಿದ್ದರು. ಮರುದಿನ ದೇಹವನ್ನು ಪತ್ತೆ ಮಾಡಲಾಗಿತ್ತು ಎಂದು ಹೇಳಿದರು.