ಆರಂಭದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಧೀಶರು, ‘ಸಾತಂಕುಳಂ ಠಾಣೆಯ ಪೊಲೀಸರು ವಿಚಾರಣೆಗೆ ಸಹಕಾರ ನೀಡಲಿಲ್ಲ. ಒಬ್ಬ ಕಾನ್ಸ್ಟೆಬಲ್ ನನ್ನ ವಿರುದ್ಧ ಅವಮಾನಕಾರಿ ಹೇಳಿಕೆ ನೀಡಿದ್ದರೆ ಇನ್ನೊಬ್ಬ, ದೇಹಭಾಷೆಯ ಮೂಲಕವೇ ಬೆದರಿಕೆ ಹಾಕಿದ್ದ’ ಎಂದು ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿಗೆ ತಿಳಿಸಿದ್ದರು.