ದೇಶದ ಆಡಳಿತ ಸುಧಾರಣೆಗಾಗಿ 2005ರಲ್ಲಿ ಮನಮೋಹನ್ ಸಿಂಗ್ ಅವರ ಸರ್ಕಾರ ಎರಡನೇ ಆಡಳಿತ ಸುಧಾರಣಾ ಆಯೋಗವನ್ನು ರಚನೆ ಮಾಡಿತ್ತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅದರ ಅಧ್ಯಕ್ಷರಾಗಿದ್ದರು.2006ರಿಂದ 2009ರ ವರೆಗೆ ಈ ಆಯೋಗವು 15 ಅಧ್ಯಾಯಗಳ ಬೃಹತ್ ವರದಿ ಸಲ್ಲಿಸಿತ್ತು. ಆಡಳಿತ ಸುಧಾರಣೆಗಾಗಿ ಮೊಯಿಲಿ ಆಯೋಗ ಹಲವು ಸಲಹೆ ಸೂಚನೆಗಳನ್ನು ನೀಡಿತ್ತಾದರೂ, ನಂತರದಲ್ಲಿ ಅದು ಜಾರಿಯಾಗದೇ ಉಳಿಯಿತು.